Recent Posts:
- ಅಡ್ಡೂರ ದೇಬೆ, ಕುತ್ತಿಪುನ್ಕೆ ಉಲ್ಲೇರಗುತ್ತು - ಪಾರ್ದನ
- ತುಳುವೆರೆ ಮರಣಡು ಬೊಜ್ಜದ ಕ್ರಮ
- ದೀಪದೆಣ್ಣೆ
- ಬೈದ್ಯರು ಮತ್ತು ತುಳುನಾಡ ದೈವಗಳು
- ಕೋಟಿ ಚೆನ್ನಯರು ಮತ್ತು ಅವರ ಕುಟುಂಬ ದೈವಗಳ ವಿಷಯದಲ್ಲಿರುವ ಗೊಂದಲ
- ಎಣ್ಮೂರ ಕ್ರಮದಲ್ಲಿ ಆಗುತ್ತಿರುವ ಬೈದೇರುಗಳ ನೇಮ
ಮಡಿವಾಳ ಜನಾಂಗದ ಪೌರೋಹಿತ್ಯದಲ್ಲಿ ನಡೆಯುತ್ತಿದ್ದ ಬಿಲ್ಲವರ ಮದುವೆಗಳು
ಮೂಲ ತುಳುವರಲ್ಲಿ
ಬಿಲ್ಲವರುಒಬ್ಬರು, ವಿಶಿಷ್ಟವಾದಆರಾಧನೆಮತ್ತುಆಚರಣೆಯ ಮುಖಾಂತರ ತಮ್ಮದೇ ಆದ ಸಂಪ್ರದಾಯಗಳನ್ನು ನಡೆಸಿಕೊಂಡು ಬಂದವರು. ಇವರ ಅನಾದಿಯಮದುವೆ ಸಂಪ್ರದಾಯಗಳು ಕೂಡ ತಮ್ಮದೇ ಆದ ಚೌಕಟ್ಟಿನಲ್ಲಿ ನಡೆಸಿಕೊಂಡು ಬಂದವರು. ಬಿಲ್ಲವರ ಮದುವೆಗಳೆಲ್ಲವುಜಾತಿಯ ಗುರಿಕಾರಅಥವಬೋಂಟ್ರನಮುಂದಾಳತ್ವದಲ್ಲಿ ನಡೆಯುತ್ತಿತ್ತು. ಇಲ್ಲಿ ಆತನ ತೀರ್ಮಾನವೆ ಅಂತಿಮವಾಗಿತ್ತು. ಮದುವೆಯ ಮುಂಚಿನ ದಿವಸ ಬೆಳಿಗ್ಗೆಗರಡಿಯಲ್ಲಿ ಗಂಡಿಗೆ ಮತ್ತು ಹೆಣ್ಣಿಗೆಕಳಶ ಸ್ನಾನವನ್ನು ಮಾಡಿಸುತ್ತಿದ್ದರು. ಗರಡಿಯತುಳಸಿ ಕಟ್ಟೆಯ ಮುಂದೆಮಡಿವಾಳಜನಾಂಗದ ಹೆಂಗಸು ಮರದ ಮಣೆಯನ್ನು ಇಟ್ಟು ಬಿಳಿಬಟ್ಟೆ ಹಾಸಿ ಆಸನ ಸಿದ್ದ ಪಡಿಸಿಡುತ್ತಾರೆ. ಗರಡಿ ಅರ್ಚಕರು ಕಳಶ ನೀರನ್ನು ತಂದು ಇಡುತ್ತಾರೆ. ಗುರಿಕಾರನ ಹೆಂಡತಿಯ ಮುಂದಾಳತ್ವದಲ್ಲಿ5ಜನ ಸುಮಂಗಲಿಯರು ಆಕೆಗೆ ಕಳಶದ ನೀರನ್ನು ಎರೆಯುತ್ತಾರೆ.
ಮದುವೆಯ ಮುಂಚಿನ ದಿವಸ ಗಂಡಿನ ಮನೆಯಲ್ಲಾದರೆ
ಮುಹೂರ್ತ ಕಂಬವನ್ನು ಬೋಂಟ್ರರಿಂದ ಹಾಕಿಸಲ್ಪಡುತ್ತಾರೆ. ಅದಕ್ಕಿಂತ ಮುಂಚೆಮಡಿವಾಳಜನಾಂಗದ ವ್ಯಕ್ತಿ ಬಂದು ತುಳಸಿಕಟ್ಟೆಯ ಮುಂದೆಮಂಡಲಬಿಡಿಸಿ ಎಲೆ ಹಾಕಿ ಅದರ ಮೇಲೆಒಂದು ಸೇರು ಕುಚಲಕ್ಕಿಹಾಕಿ ಅದರ ಮೇಲೆಜುಟ್ಟು ಇದ್ದ ತೆಂಗಿನಕಾಯಿಇಟ್ಟು5 ವೀಳ್ಯದೆಲೆಒಂದು ಅಡಿಕೆಇಟ್ಟು ತಯಾರಿ ಮಾಡಿಕೊಳ್ಳುತ್ತಾನೆ. ತದನಂತರ ಮನೆಯ ಹಿರಿಯರು ಗುರಿಕಾರನ ಮುಂದಾಳತ್ವದಲ್ಲಿ ದೈವದೇವರುಗಳಿಗೆ ಪ್ರಾರ್ಥನೆ ಮಾಡುತ್ತಾರೆ.ಮಡಿವಾಳಜನಾಂಗದ ವ್ಯಕ್ತಿ ಮುಹೂರ್ತ ಕಂಬದ ನಾಲ್ಕು ದಿಕ್ಕಿನಲ್ಲಿನಾಲ್ಕು ಕಳಶಇಡುತ್ತಾರೆ. ಅದನ್ನುಸಾಲಿಯಾನ್,ಮೂಲ್ಯಾನ್,ಬಂಗೇರ್ಮತ್ತುಕೋಟ್ಯಾನ್ಬಳಿಯ(ಬರಿಯ) ಸುಮಂಗಲಿ ಹೆಣ್ಣು ಮಕ್ಕಳು ಎತ್ತಿಕೊಂಡುತೋರಣ ಕಂಬಕ್ಕೆ ಮೂರು ಸುತ್ತು ಬರಬೇಕು ತದನಂತರ ಅದರಲ್ಲಿದ್ದ ನೀರನ್ನು ತೆಂಗಿನ ಬುಡಕ್ಕೆ ಚೆಲ್ಲುವುದು. ತದನಂತರಗುರುಕಾರ್ನವರಿಗೆ(ಮನೆಯಲ್ಲಿ ಗತಿಸಿಹೋದವರಿಗೆ)3 ಅಥವ 7 ಎಲೆಹಾಕಿನೀರ್ ದೋಸೆ(ತೆಲ್ಲಾವು)ಮತ್ತುಕೋಳಿಮನೆಯ ಹೆಂಗಸರು ಬಡಿಸುವುದು. ಬಡಿಸಿದ ಎಲೆಗಳ ಮುಂದೆ ಮದುಮಗನ ಮತ್ತು ಮದುಮಗಳಹೊಸ ಬಟ್ಟೆಯನ್ನು ಇಟ್ಟು ಪ್ರಾರ್ಥಿಸುವುದು. ತದನಂತರ ಬಂದವರಿಗೆಲ್ಲ ಊಟ ನೀಡುವುದು. ನಂತರಬೈದೇರುಗಳ ಸಂಧಿಯನ್ನು ಹಾಡಿ ಬಂದಂತಹ ಜನರ ಮನಸ್ಸಿಗೆ ಮುದನೀಡುತ್ತಿದ್ದರು. ಇದು ಮದುಮಗನ ಮನೆಯಲ್ಲಾದರೆ ಮದುಮಗಳ ಮನೆಯಲ್ಲಿಮುಹೂರ್ತ ಕಂಬಒಂದು ಬಿಟ್ಟು ಬೇರೆಲ್ಲ ಕ್ರಮಗಳು ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ.
ಬೆಳಗ್ಗೆ ಮದುಮಗನನ್ನು ಹತ್ತಿರದ
ಹೊಳೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸುತ್ತಾರೆ. ಇಲ್ಲಿ ಮುಖ್ಯವಾದ ಅಂಶವೆಂದರೆಮಡಿವಾಳ(ದಲ್ಯಂತ ಮಾನಿ)ಜನಾಂಗದ ವ್ಯಕ್ತಿ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಾರೆ. ಬಿಲ್ಲವರ ಹುಟ್ಟು ಸಾವು ಶುಭ ಸಮಾರಂಭದಲ್ಲಿ ಇವರು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದರು. ಅವರು ಬೇಗನೆ ಬಂದು ಮದುವೆ ಮಂಟಪದ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ತೆಂಗಿನಮಡಲಿನಿಂದ ಮಾಡಿದ ಮಂಟಪದ ಮೇಲಕ್ಕೆ ಬಿಳಿ ಬಟ್ಟೆಯಿಂದಕೊಡಿನಾಡು ಕಟ್ಟಿಮಧ್ಯಕ್ಕೆತೆಂಗಿನಕಾಯಿವೀಳ್ಯದೆಲೆಅಡಿಕೆಕಟ್ಟುತ್ತಾರೆ. ತದನಂತರ ಮಾವಿನ ಸೊಪ್ಪಿನಿಂದ ಮಂಟಪ ಅಲಂಕರಿಸುತ್ತಾರೆ. ತದನಂತರ ಅಲ್ಲಿ ಎರಡುಮರದ ಮಣೆಗಳನ್ನು ಇಟ್ಟು ಅದರ ಮೇಲೆ ಬಿಳಿ ಹಾಸನ್ನು ಹೊದಿಸಿ ಆಸನಗಳನ್ನು ಸಿದ್ದಪಡಿಸುತ್ತಾರೆ. ಮರದಮಕ್ಕಾಲಿಗೆಯಮೇಲೆ ದೀಪ ಉರಿಸಿಡುತ್ತಾರೆ. ಕೈ ಧಾರೆಗೆಕೊಂಬಿನ ಗಿಂಡೆಅಲಂಕರಿಸಿ ತೆಂಗಿನಕಾಯಿ ಇಟ್ಟು ಸಿದ್ದಮಾಡಿರುತ್ತಾರೆ. ತದನಂತರ ಅಲಂಕರಿಸಿದ ಮದುಮಗನ ಕೈಯಲ್ಲಿ5 ವೀಳ್ಯದೆಲೆಒಂದು ಅಡಿಕೆಯನ್ನು ಕೊಟ್ಟು ತುಳಸಿಕಟ್ಟೆಯ ಮುಂದೆ ನಿಲ್ಲಿಸಿ ಒಂದು ಎಲೆಯ ಮೇಲೆ ಎರಡು ಸೀಯಾಳವನ್ನು ಇಟ್ಟು ಗ್ರಾಮ ದೇವರನ್ನು ಪ್ರಾರ್ಥಿಸುತ್ತಾರೆ.
ಹೆಣ್ಣಿನ ಮನೆಯಲ್ಲಿ ಹೆಣ್ಣನ್ನುಗುರಿಕಾರನ ಹೆಂಡತಿಯ ಮಂದಾಳತ್ವದಲ್ಲಿ ಅಲಂಕರಿಸುತ್ತಾರೆ. ತದನಂತರ ಹೆಣ್ಣಿನ ಕೈಯಲ್ಲಿ ರಕ್ಷಣೆ ಮತ್ತು ದೃಷ್ಟಿ ನಿವಾರಣ ಭಾಗವಾಗಿಗೆಜ್ಜೆಕತ್ತಿಯನ್ನು ಕೊಡುತ್ತಾರೆ. ತದನಂತರಹೆಣ್ಣಿನ ತಾಯಿಮಗಳಿಗೆತಾಳಿಯನ್ನು ಕಟ್ಟುತ್ತಾರೆ. ಮದುಮಗಳ ಮಾವನ ಮಗಳುಕಾಲುಂಗುರವನ್ನು ತೊಡಿಸುತ್ತಾರೆ. ಮದುಮಗನ ಮನೆಗೆ ಮದುಮಗಳ ದಿಬ್ಬಣ ಬರುತ್ತದೆ. ಅಲ್ಲಿ ಎರಡು ಕಡೆಯವರು ಆರತಿ ಎತ್ತಿ ಅಕ್ಕಿ ಹಾರಿಸಿ ಕುಂಕುಮ ನೀಡಿ ಒಬ್ಬರನೊಬ್ಬರು ಬರಮಾಡಿಕೊಳ್ಳುತ್ತಾರೆ. ಎರಡು ಕಡೆಯಗುರಿಕಾರರು ಒಬ್ಬರನೊಬ್ಬರು ಆಲಂಗಿಸಿಕೊಳ್ಳುತ್ತಾರೆ. ತದನಂತರ ಗುರಿಕಾರರ ಮುಂದಾಳತ್ವದಲ್ಲಿ ಸೋದರಮಾವಂದಿರುಧಾರೆ ಏರಿಸುವ ಕ್ರಮಮಾಡುತ್ತಾರೆ ಇಲ್ಲಿಧಾರೆಏರುವುದು ಎನ್ನುವುದು ತುಳುವರ ಸಂಪ್ರದಾಯ ಅಂದರೆ ಇಲ್ಲಿ ಧಾರೆ ಎರೆದು ಕೊಡುವ ಕ್ರಮವಿಲ್ಲ.ಕೊಂಬಿನ ಗಿಂಡೆಯನ್ನು ಭೂಮಿಗೆ ತಾಗಿಸಿ ಮೇಲಕ್ಕೆ ಎತ್ತುವುದು ಈ ರೀತಿಯಾಗಿಮೂರು ಸಲಮಾಡಿ ತದನಂತರ ಅದೇ ಗಿಂಡೆ ನೀರನ್ನು ಮದುಮಕ್ಕಳ ಮೇಲೆ ಪ್ರೋಕ್ಷಣೆ ಮಾಡುವುದು.
Share this postಮಾತೃ ಪ್ರಧಾನ
(ಅಳಿಯ ಕಟ್ಟು, ಅಪ್ಪೆ ಕಟ್ಟು)ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿಗೆ ಮದುವೆಯಾದ ಮೇಲುತಾಯಿ ಮನೆಯ ಆಸ್ತಿಯಲ್ಲಿ ಅಧಿಕಾರ ಇರುವ ಕಾರಣ ಹೆಣ್ಣನ್ನು ಧಾರೆ ಎರೆದು ಕೊಡುವ ಸಂಪ್ರದಾಯವಿಲ್ಲ. ಹಾಗೂ ಮದುವೆಯಾದ ಮೇಲೆ ಹೆಚ್ಚಿನ ಕಡೆಗಳಲ್ಲಿ ಹುಡುಗ ಮನೆಅಳಿಯನಾಗಿ ಅತ್ತೆ ಮನೆಗೆ ಹೆಂಡತಿಯ ಆಸ್ತಿಗೆರಕ್ಷಕನಾಗಿ ಬರುವ ವಾಡಿಕೆ ಇದೆ. ಧಾರೆ ಏರಿಸಿದ ನಂತರ ಎರಡು ಕಡೆಯವರುಕಂಚಿ(ಕಂಚಿನ ಹರಿವಾಣ) ಏರಿಸಿಬಂದವರೆಲ್ಲಮುಯ್ಯಿ(ಹಣ ಇಡುವುದು) ಮಾಡುತ್ತಾರೆ. ತದನಂತರ ಹೆಣ್ಣುಮಗಳನ್ನು ಗಂಡಿನ ಮನೆಯವರಿಗೆ ನೀಡುವ ಕಾರ್ಯಕ್ರಮವನ್ನುಗುರಿಕಾರಹಿತನುಡಿಗಳನ್ನು ಆಡಿ ಹೆಣ್ಣು ಮಗಳು ಯಾವ ರೀತಿ ಬೆಳೆದಿದ್ದಾಳೆ ಇನ್ನು ಮುಂದಕ್ಕೆ ನೀವೆ ಅವಳಿಗೆ ಆಧಾರ ಎಂದು ಅತ್ತೆಯ ಕೈಗೆ ಅವಳ ಕೈಯನ್ನು ಇಟ್ಟು ಒಪ್ಪಿಸುತ್ತಾರೆ. ಇಲ್ಲಿ ಹೆಂಗಸರುಶೋಭಾನೆಹಾಡು ಹಾಡುತ್ತಾರೆ. ತದ ನಂತರ ಬಂದವರಿಗೆಲ್ಲಔತಣದ ಊಟ. ಈ ರೀತಿಯಾಗಿ ಮದುವೆಯುಮಡಿವಾಳಜನಾಂಗದ ಪೌರೋಹಿತ್ಯದಲ್ಲಿ ಗುರಿಕಾರರ ಮಂದಾಳತ್ವದಲ್ಲಿ ಅತೀ ಆಚಾರಬದ್ಧವಾಗಿ ನಡೆಯುತ್ತಿತ್ತು. ಕೆಲವೊಂದು ಆಚರಣೆಗಳು ಆಯಾಯ ಸ್ಥಳಕ್ಕೆ ಅನುಗುಣವಾಗಿ ವ್ಯತ್ಯಾಸವಿದೆ. ಆದರೆವೈದಿಕ ಸಂಪ್ರದಾಯಗಳಾದಗಣಹೋಮಲಾಜ ಹೋಮಸಪ್ತಪದಿಗಳಿಗೆ ಮನಸೋತು ಜನರು ಮೂಲ ಆಚರಣೆಗಳನ್ನು ಬದಿಗೊತ್ತಿ ಆಧುನಿಕತೆಯ ಹಿಂದೆ ಹೆಜ್ಜೆ ಹಾಕಿದ್ದಾರೆ. ತುಳುನಾಡ ಮೂಲ ಸಂಸ್ಕ್ರತಿಗಳೆಲ್ಲಪರದೆಯ ಹಿಂದೆ ಇರುವ ಕನ್ನಡಿಯಂತಾಗಿದೆ. ಕಡೆಯದಾಗಿ ನಮ್ಮ ಮುಂದಿನ ಪೀಳಿಗೆಗೆ ನಾವು ಏನನ್ನು ಉಳಿಸದೆ ಸ್ವಚ್ಚ ಮಾಡಿ ಹೋಗುತ್ತಿದ್ದೇವೆ.ಬರಹ:
ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ.

